ಸ್ಟಾರ್ ಸುವರ್ಣವಾಹಿನಿಯು ವೀಕ್ಷಕರ ಸಮ್ಮುಖದಲ್ಲಿಇದೇ ಸೆಪ್ಟಂಬರ್ ೨೨ (ಗುರವಾರ) ದಂದು ಬೆಂಗಳೂರಿನ ವಸಂತನಗರದಅಂಬೇಡ್ಕರ್ ಭವನದಲ್ಲಿದಸರಾ ಹಬ್ಬದ ಪ್ರಯುಕ್ತ ಸಂಜೆ ೬ಗಂಟೆಗೆಅತಿ ವಿಜ್ರಂಭಣೆಯ ಸುವರ್ಣ ಮಹೋತ್ಸವವನ್ನುಆಚರಿಸುತ್ತಿದೆ.ಈ ಸುಸಂದರ್ಭದಲ್ಲಿ ಸ್ಟಾರ್ ಸುವರ್ಣವಾಹಿನಿಯ ಸ್ಟಾರ್ಸ್ಗಳು ಭಾಗವಹಿಸಿ ಎಲ್ಲರಿಗೂ ಮನರಂಜನೆಯನ್ನು ನೀಡಲಿದ್ದಾರೆ.
ದಸರಾ ವಿಶೇಷವಾಗಿನವ ದೇವತೆಗಳಿಗೇ ಮಿಸಲಾಗಿರುವ ಹಬ.ಅಂತೆಯೇ, ನವರಾತ್ರಿ ಎಂಬ ಥೀಮ್ನ್ನುಇಟ್ಟಿಕೊಂಡಿರುವ ಈ ಮಹೋತ್ಸವದಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಮಹಿಳಾ ಪಾತ್ರಧಾರಿಗಳಿಂದ ವಿವಿಧರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಅವನು ಮತ್ತು ಶ್ರಾವಣಿಯ ಶ್ರಾವಣಿ, ಜಸ್ಟ್ ಮಾತ್ ಮಾತಲ್ಲಿಯ ಸಿಂಧು,ಅಮ್ಮಧಾರಾವಾಹಿಯ ಶಾಲಿನಿ,ದುರ್ಗಾ, ಅಮೃತ ಮತ್ತು ವರ್ಷಾ ಈ ಮಹೋತ್ಸವಕ್ಕೆ ಮೆರಗನ್ನು ನೀಡಲಿದ್ದಾರೆ.
ಈ ದಸರಾ ವೇದಿಕೆಯಲ್ಲಿ ಸ್ಟಾರ್ ಸುವರ್ಣಕ್ಕೆಕೀರ್ತಿಯಂತಿರುವ ಶಕುಂತಲಾದೇವಿ (ಹೇಮಾಚೌಧರಿ),ಜಯಕ್ಕ (ಜಯಲಕ್ಷ್ಮೀ)ಮತ್ತು ಸುಕನ್ಯ (ಕೌಸಲ್ಯ) ಅವರಿಗೆ ಸ್ಟಾರ್ ಸುವರ್ಣವಾಹಿನಿಯ ಹೆಮ್ಮೆಯ ಎಂಬ ಪ್ರಶಸ್ತಿಯನ್ನು ನೀಡಿಗೌರವಿಸಲಾಗುತ್ತದೆ. ಹಾಗೆ ಇನ್ನಷ್ಟು ವಿಶೇಷ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದು.
ಸೂರ್ಯ-ಶ್ರಾವಣಿ, ಯಶ್-ಸಿಂಧು, ಚರೀತ್-ಅನುಷಾ,ಅಮೃತ-ಅಜಯ್ ಜೋಡಿಗಳಿಂದ ರೋಮ್ಯಾಂಟಿಕ್ ಪರ್ಫಾನ್ಸ್ಗಳು ಈ ವೇದಿಕೆಯಲ್ಲಿಎಲ್ಲರಿಗೂ ಮುದ ನೀಡಲಿವೆ. ಅಲ್ಲದೆ, ಡ್ಯಾನ್ಸ್ಡ್ಯಾನ್ಸ್ನ ವಿಜೇತ ತೌಶೀರ್ ಮತ್ತು ಮಕ್ಕಳು ವಿಶೇಷ ನೃತ್ಯವನ್ನು ಮಾಡಲಿದ್ದಾರೆ. ಹಾಗೆ ಅಭಿಮಾನಿಗಳ ಜೊತೆ ನಟ ನಟಿಯರ ಪರಸ್ಪರ ಸಂಭಾಷಣೆಯೂ ನಡೆಯಲಿದೆ.
ಒಂದಿಷ್ಟು ಮೋಜು,ಒಂದಿಷ್ಟು ಮಸ್ತಿ ಜೊತೆಗೆ ಸ್ಟಾರ್ಗಳ ಕಲರವ ಬೆಂಗಳೂರಿನ ವಸಂತನಗರದಅಂಬೇಡ್ಕರ್ ಭವನದಲ್ಲಿ ಸೆಪ್ಟಂಬರ್ ೨೨ರಂದು ಸಂಜೆ ೬ಗಂಟೆಗೆ ನಡೆಯಲ್ಲಿದೆ.ಆಸಕ್ತ ಅಭಿಮಾನಿಗಳಿಗೆ ಉಚಿತ ಪ್ರವೆಶವಿದ್ದು ಈ ಸುವರ್ಣ ಮಹೋತ್ಸವಕ್ಕೆಅಗಮಿಸಲು ಸ್ಟಾರ್ ಸುವರ್ಣ ವಾಹಿನಿ ಆಮಂತ್ರಿಸುತ್ತದೆ.